Sanathana Natyalaya

ಸನಾತನ ನಾಟ್ಯಾಲಯ, ಮಂಗಳೂರು – ನಲ್ವತ್ತರ ಸಂಭ್ರಮದಲ್ಲಿ ಹಾರಿಕಾ ಮಂಜುನಾಥ್

05 ಏಪ್ರಿಲ್ 2023, ಮಂಗಳೂರು: ಸನಾತನ ನಾಟ್ಯಾಲಯ, ಮಂಗಳೂರು ಇದರ 40ನೇ ವರ್ಷಾಚರಣೆ ಪ್ರಯುಕ್ತ ದಿನಾಂಕ 09-04-2023 ಭಾನುವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಈ ಕೆಳಗಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಸಂಜೆ 5-30ಕ್ಕೆ ಶ್ರೀ ದೇವಿ ಭಜನಾ ಮಂದಿರ ಮೂಡುಶೆಡ್ಡೆ ಇವರಿಂದ “ಕುಣಿತ ಭಜನೆ”, 6-15ಕ್ಕೆ ಬಾಲ ವಾಗ್ಮಿ ಹಾರಿಕಾ ಮಂಜುನಾಥ್ ಬೆಂಗಳೂರು ಇವರಿಂದ “ರಾಷ್ಟ್ರ-ಧರ್ಮ ಜಾಗೃತಿ ಸಂದೇಶ” ಹಾಗೂ 7-00ಕ್ಕೆ ನಲ್ವತ್ತರ ಸಂಭ್ರಮದ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭಾರತನಾಟ್ಯ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.

ಕಲಾಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಕೆ. ಶೆಟ್ಟಿ, ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗರಾಜ್ ಇವರು ಪ್ರೀತಿಪೂರ್ವಕ ಸ್ವಾಗತವನ್ನು ಕೋರಿದ್ದಾರೆ.

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate